Friday, 6 January 2012

ಉಪೇ೦ದ್ರ ನಿರ್ದೇಶನದಲ್ಲಿ ಶಿವಣ್ಣ,ರಾಘಣ್ಣ ಮತ್ತು ಪುನೀತ್ ಸ೦ಗಮ..


ಎಲ್ಲಾ ಉಪೇ೦ದ್ರ,ಶಿವಣ್ಣ ಮತ್ತು ಪುನೀತ್ ಅಭಿಮಾನಿಗಳಿಗೆ ಈ ವರ್ಷ ದೊಡ್ದ ಹಬ್ಬ ಕಾದಿದೆ.ಏನೆ೦ದು ನಿಮಗೂ ತಿಳಿಯ ಬೇಕೆ ಮು೦ದೆ ಓದಿ.ನಮ್ಮ "ಕರ್ನಾಟಕದ ಅಧಿಪತಿ,ರಿಯಲ್ ಸ್ಟಾರ್,ಸೂಪರ್ ಸ್ಟಾರ್,ಡಿಫರೆ೦ಟ್ ಸ್ಟಾರ್" ಉಪೇ೦ದ್ರ ರವರು ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.ಆದರೆ ಈ ಬಾರಿ ಅವರು ನಟಿಸುತ್ತಿಲ್ಲಾ ಬದಲಾಗಿ ಕನ್ನಡದ ಸಹೋದರರಾದ ಶಿವರಾಜ್ ಕುಮಾರ್,ರಾಘವೇ೦ದ್ರರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನಟಿಸುತ್ತಿದಾರೆ.ಶಿವಣ್ಣ ಹಾಗು ಪುನೀತ್ ರದ್ದು ಪೂರ್ಣ ಪ್ರಮಾಣದ ಪಾತ್ರ.ರಾಘಣ್ಣ ರವರದ್ದು ಅಥಿತಿ ಪಾತ್ರವ೦ತೆ.ಒಟ್ಟಾರೆ 2012 ಉಪ್ಪಿ ಅಭಿಮನಿಗಳಿಗೆ ಸಡಗರದ ವರ್ಷ.


ಇದು ಗಾಂಧಿನಗರ ಬೆಚ್ಚಿ ಬೀಳಿಸುವ ಬ್ರೇಕಿಂಗ್ ನ್ಯೂಸ್


ಗಾಂಧಿನಗರ ಬೆಚ್ಚಿಬೀಳಿಸುವ ಬ್ರೇಕಿಂಗ್ ನ್ಯೂಸೊಂದು ಹೊರಬಿದ್ದಿದೆ. ಇದು ಗಾಳಿ ಸುದ್ದಿಯಲ್ಲ, ಅಧಿಕೃತವಾಗಿ ಪ್ರಕಟವಾಗಬೇಕಷ್ಟೇ. ಶಿವರಾಜ್ ಕುಮಾರ್ ಚಿತ್ರವೊಂದನ್ನು ಉಪೇಂದ್ರ ನಿರ್ದೇಶಿಸುತ್ತಾರೆ ಎನ್ನುವ ಸುದ್ದಿ ಕಳೆದ ವರ್ಷ ಹರಡಿತ್ತು. ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಒಂದೇ ಚಿತ್ರದಲ್ಲಿ ಈಗ ನಟಿಸಲಿದ್ದಾರೆ. ಚಿತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಲಿದ್ದಾರೆ.

2010 ರಲ್ಲಿ ಸಿಂಬಲ್ ಚಿಹ್ನೆಯ ಮೂಲಕ ಸೂಪರ್ ಆಗಿ ಗಿರಿಗಿಟ್ಲೆ ಆಡಿಸಿದ್ದ ಉಪೇಂದ್ರ ತನ್ನಲ್ಲಿರುವ ನಿರ್ದೇಶನದ ಜಾಣ್ಮೆಯನ್ನು ಮತ್ತೊಮ್ಮೆ ಒರೆಗೆ ಹಚ್ಚಲಿದ್ದಾರೆ. ಚಿತ್ರವನ್ನು ರಾಕಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ. ಉಳಿದ ತಂತ್ರಜ್ಞಾನ, ತಾರಾಗಣ ಇನ್ನೂ ಅಂತಿಮವಾಗಿಲ್ಲ.

ಉಪೇಂದ್ರ ಅಭಿನಯದ ಆರಕ್ಷಕ ಚಿತ್ರ ಈ ತಿಂಗಳು ತೆರೆಗೆ ಬರಲಿದೆ. ಗಾಡ್ ಫಾದರ್ ಚಿತ್ರ ಚಿತ್ರೀಕರಣದ ಹಂತದಲ್ಲಿದ್ದು, ಕಲ್ಪನಾ ಚಿತ್ರಕ್ಕೆ ಇದೇ ತಿಂಗಳು ಸಂಕ್ರಾಂತಿಯಂದು ಮಹೂರ್ತ ಫಿಕ್ಸ್ ಆಗಿದೆ. 3ಡಿ ಚಿತ್ರ ಕಠಾರಿ ವೀರ ಸುರಸುಂದರಾಂಗಿ ಇದ್ದಿಷ್ಟು ಸದ್ಯ ಉಪೇಂದ್ರ ಬಳಿ ಇರುವ ಪ್ರಾಜೆಕ್ಟ್ ಗಳು.

2010ರಲ್ಲಿ ಅವರು ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದ ಸೂಪರ್ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಭರ್ಜರಿ ಹಿಟ್ ಆಗಿತ್ತು. ಆ ಚಿತ್ರಕ್ಕೆ ಕೂಡಾ ರಾಕಲೈನ್ ವೆಂಕಟೇಶ್ ಅವರೇ ನಿರ್ಮಾಪಕರಾಗಿದ್ದರು. ಈಗ ಇನ್ನೊಂದು ಮೆಗಾ ಬಜೆಟ್ ಚಿತ್ರಕ್ಕೆ ಅವರು ಕೈಹಾಕಿದ್ದಾರೆ. ಬಾಕ್ಸ್ ಆಫೀಸ್ ಕಿಂಗ್ ಪುನೀತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಾಗಿ ನಟಿಸುವುದು ಒಂದು ಕಡೆಯಾದರೆ ಆ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಮಾಡುವುದು ಪ್ರೇಕ್ಷಕರ ಪಾಲಿಗೆ ಹಬ್ಬವೋ ಹಬ್ಬ.





No comments:

Post a Comment