ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರಿಗೆ 'ರಿಯಲ್ ಸ್ಟಾರ್' ಅನ್ನುವ ಮಾತು ಪಕ್ಕಾ ಅನ್ವಯಿಸುವಂತಿದೆ. ಕಾರಣ ಸ್ವಪ್ರಯತ್ನ ಮತ್ತು ಹೊಸತನದಲ್ಲಿ ಸದಾ ನಂಬಿಕೆ. ಕಥೆ, ನಟನೆ, ನಿರ್ದೇಶನ, ಸಾಹಿತ್ಯ, ಹಾಡುಗಾರಿಕೆ ಹೀಗೆ ಎಲ್ಲಾ ವಿಭಾಗಗಳಲ್ಲೂ ಉಪ್ಪಿಯದು ಎತ್ತಿದ ಕೈ.
ಉಪ್ಪಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಜಾಯಮಾನ ಅವರದು. ಅದರಲ್ಲೂ ಅವರೇ ನಿರ್ದೆಶಿಸಿ ನಟಿಸಿರುವ ಚಿತ್ರಗಳಿಗೆ ಈ ಮಾತು ಪಕ್ಕಾ ಅನ್ವಯಿಸುತ್ತದೆ. ಸೂಪರ್ ಅದಕ್ಕೆ ಇತ್ತೀಚಿನ ಸಾಕ್ಷಿ. ಆದರೆ ಉಪೇಂದ್ರ ನಟನೆಯ ಚಿತ್ರಗಳೆಲ್ಲವೂ ಸಕ್ಸಸ್ ಆಗಿದೆ, ಆಗುತ್ತದೆ ಎಂದು ಹೇಳಲಾಗದು.
ಈ ಎಲ್ಲ ವಿಷಯಗಳ ಹಿಂದೆ ಉಪೇಂದ್ರತನವಿದೆ, ಒಂದು ಸ್ಪಷ್ಟ ಕಾರಣವಿದೆ. ಬೇರೆಯವರ ನಿರ್ದೇಶನದಲ್ಲಿ ನಟಿಸುವಾಗ ಉಪ್ಪಿ ನಿರ್ದೇಶನದತ್ತ ತಲೆಯನ್ನೇ ಹಾಕುವುದಿಲ್ಲವಂತೆ. ಅವರಿಗೆ ಬೇರೆಯವರ ಬಗ್ಗೆ ಇರುವ ಕಾಳಜಿ ಹಾಗೂ ಕ್ರಿಯೆಟಿವ್ ವ್ಯಕ್ತಿಯೊಬ್ಬರಿಗೆ ಇರಲೇಬೇಕಾದ ಸ್ವಾತಂತ್ರ್ಯದ ಅರಿವು ಎಷ್ಟಿದೆ ಎಂಬುದು ಅವರ ಮಾತಿನಿಂದ ವ್ಯಕ್ತವಾಗುತ್ತದೆ.
ಉಪ್ಪಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಜಾಯಮಾನ ಅವರದು. ಅದರಲ್ಲೂ ಅವರೇ ನಿರ್ದೆಶಿಸಿ ನಟಿಸಿರುವ ಚಿತ್ರಗಳಿಗೆ ಈ ಮಾತು ಪಕ್ಕಾ ಅನ್ವಯಿಸುತ್ತದೆ. ಸೂಪರ್ ಅದಕ್ಕೆ ಇತ್ತೀಚಿನ ಸಾಕ್ಷಿ. ಆದರೆ ಉಪೇಂದ್ರ ನಟನೆಯ ಚಿತ್ರಗಳೆಲ್ಲವೂ ಸಕ್ಸಸ್ ಆಗಿದೆ, ಆಗುತ್ತದೆ ಎಂದು ಹೇಳಲಾಗದು.
ಈ ಎಲ್ಲ ವಿಷಯಗಳ ಹಿಂದೆ ಉಪೇಂದ್ರತನವಿದೆ, ಒಂದು ಸ್ಪಷ್ಟ ಕಾರಣವಿದೆ. ಬೇರೆಯವರ ನಿರ್ದೇಶನದಲ್ಲಿ ನಟಿಸುವಾಗ ಉಪ್ಪಿ ನಿರ್ದೇಶನದತ್ತ ತಲೆಯನ್ನೇ ಹಾಕುವುದಿಲ್ಲವಂತೆ. ಅವರಿಗೆ ಬೇರೆಯವರ ಬಗ್ಗೆ ಇರುವ ಕಾಳಜಿ ಹಾಗೂ ಕ್ರಿಯೆಟಿವ್ ವ್ಯಕ್ತಿಯೊಬ್ಬರಿಗೆ ಇರಲೇಬೇಕಾದ ಸ್ವಾತಂತ್ರ್ಯದ ಅರಿವು ಎಷ್ಟಿದೆ ಎಂಬುದು ಅವರ ಮಾತಿನಿಂದ ವ್ಯಕ್ತವಾಗುತ್ತದೆ.
ರಿಯಲ್ ಸ್ಟಾರ್ ಉಪೇಂದ್ರ ವೃತ್ತಿಪರತೆ ಗುಟ್ಟುಅದಕ್ಕೆ ಉಪ್ಪಿ ಕೊಡುವ ಕಾರಣ ನೇರ ಹಾಗೂ ಸ್ಪಷ್ಟ. "ನಾನು ನಿರ್ದೇಶನ ಮಾಡುವಾಗ ಸಿನಿಮಾ ಹೇಗೆ ಬರಬೇಕು ಎಂಬ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರುತ್ತೇನೆ. ಅದಕ್ಕೆ ತಕ್ಕಂತೆ ಕಲಾವಿದರಿಂದ ಕೆಲಸ ಮಾಡಿಸುತ್ತೇನೆ. ನಾನು ನಟಿಸುವಾಗಲೂ ಅಷ್ಟೇ, ನನಗೆ ಆಕ್ಷನ್ ಕಟ್ ಹೇಳುವ ನಿರ್ದೇಶಕರ ಕಲ್ಪನೆಯಂತೆ ಚಿತ್ರ ಮೂಡಿಬರಬೇಕಾದರೆ ಅವರು ಹೇಳಿದಂತೆ ನಟಿಸುವುದಷ್ಟೇ ನನ್ನ ಕೆಲಸ.
ನಿರ್ದೇಶಕರಿಗೆ ಅವರ ಕೆಲಸಕ್ಕೆ ನಾನು ಸಲಹೆ ನೀಡುವುದು, ಅನಗತ್ಯ ಕಿರಿಕಿರಿ ತರುವುದು ಮುಂತಾದವುಗಳನ್ನು ನಾನು ಮಾಡುವುದಿಲ್ಲ. ನಾನು ನಟಿಸುವಾಗ ನನ್ನೊಳಗಿನ ನಿರ್ದೇಶಕ ಮಲಗಿ ನಿದ್ರಿಸುತ್ತಿರುತ್ತಾನೆ. ಆಗ ನಾನು ಕೇವಲ ನಿರ್ದೇಶಕರ ನಟ" ಎಂದಿದ್ದಾರೆ. ಇಂತಹ ಸರಳ ವ್ಯಕ್ತಿತ್ವ ಹಾಗೂ ಬುದ್ಧಿವಂತಿಕೆಯ ನಡೆಗಳೇ ಅವರನ್ನೊಬ್ಬ ಸೂಪರ್ ಸ್ಟಾರ್ ಮಾಡಿರುವ ಸೀಕ್ರೆಟ್.
ಇಂತಹ ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ಈಗ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ. ಆರಕ್ಷಕ ಇದೇ ತಿಂಗಳು 20ಕ್ಕೆ ಬಿಡುಗಡೆಯಾಗುತ್ತಿದೆ. ಕಠಾರಿವೀರ ಸುರಸುಂದರಾಂಗಿ, ಭೀಮೂಸ್ ಬ್ಯಾಂಗ್ ಕಿಡ್ಸ್ ಚಿತ್ರಗಳು ಬಿಡುಗಡೆ ಆಗಬೇಕಿದೆ. ಜೊತೆಗೆ 'ಕಲ್ಪನಾ' ಚಿತ್ರ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲೇ ಶಿವರಾಜ್ ಕುಮಾರ್ ಗೆ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.
ನಿರ್ದೇಶಕರಿಗೆ ಅವರ ಕೆಲಸಕ್ಕೆ ನಾನು ಸಲಹೆ ನೀಡುವುದು, ಅನಗತ್ಯ ಕಿರಿಕಿರಿ ತರುವುದು ಮುಂತಾದವುಗಳನ್ನು ನಾನು ಮಾಡುವುದಿಲ್ಲ. ನಾನು ನಟಿಸುವಾಗ ನನ್ನೊಳಗಿನ ನಿರ್ದೇಶಕ ಮಲಗಿ ನಿದ್ರಿಸುತ್ತಿರುತ್ತಾನೆ. ಆಗ ನಾನು ಕೇವಲ ನಿರ್ದೇಶಕರ ನಟ" ಎಂದಿದ್ದಾರೆ. ಇಂತಹ ಸರಳ ವ್ಯಕ್ತಿತ್ವ ಹಾಗೂ ಬುದ್ಧಿವಂತಿಕೆಯ ನಡೆಗಳೇ ಅವರನ್ನೊಬ್ಬ ಸೂಪರ್ ಸ್ಟಾರ್ ಮಾಡಿರುವ ಸೀಕ್ರೆಟ್.
ಇಂತಹ ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ಈಗ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ. ಆರಕ್ಷಕ ಇದೇ ತಿಂಗಳು 20ಕ್ಕೆ ಬಿಡುಗಡೆಯಾಗುತ್ತಿದೆ. ಕಠಾರಿವೀರ ಸುರಸುಂದರಾಂಗಿ, ಭೀಮೂಸ್ ಬ್ಯಾಂಗ್ ಕಿಡ್ಸ್ ಚಿತ್ರಗಳು ಬಿಡುಗಡೆ ಆಗಬೇಕಿದೆ. ಜೊತೆಗೆ 'ಕಲ್ಪನಾ' ಚಿತ್ರ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲೇ ಶಿವರಾಜ್ ಕುಮಾರ್ ಗೆ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.
No comments:
Post a Comment