'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಜೊತೆ ಇಷ್ಟು ದಿನ ಫೈಟ್ ಮಾಡುತ್ತಾ ಬಂದಿದ್ದ ನಿರ್ಮಾಪಕ ಕೆ ಮಂಜು ಈಗ ತಮ್ಮ 'ಗಾಡ್ಫಾದರ್' ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ವರು 'ಕಠಾರಿವೀರ' ಹಾಗೂ 'ಗಾಡ್ಫಾದರ್' ಬಿಡುಗಡೆ ವಿವಾದಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ (ಮೇ 5) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೆ ಮಂಜು, ತಮ್ಮ 'ಗಾಡ್ಫಾದರ್' ಚಿತ್ರವನ್ನು ಜೂನ್ 8 ಅಥವಾ ಜೂನ್ 15ಕ್ಕೆ ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸೂಕ್ತ ಸಮಯ ನೋಡಿ ತಮ್ಮ 'ಗಾಡ್ಫಾದರ್' ಚಿತ್ರವನ್ನು ಸೆನ್ಸಾರ್ಗೆ ಕಳುಹಿಸುವುದಾಗಿಯೂ ಅವರು ಹೇಳಿದರು.
ಚಿತ್ರರಂಗದ ಹಿತದೃಷ್ಟಿಯಿಂದ ತಮ್ಮ ಚಿತ್ರವನ್ನು ಮುಂದೂಡಿ 'ಕಠಾರಿವೀರ' ಚಿತ್ರಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ' ಕಠಾರಿವೀರ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡು 100 ದಿನ ಪೂರೈಸಲಿ ಎಂದು ಹಾರೈಸಿದರು. ಈ ಮೂಲಕ ಎರಡು ಬಿಗ್ ಬಜೆಟ್ ಚಿತ್ರಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆಬಿದ್ದಂತಾಗಿದೆ.
ಬೆಂಗಳೂರಿನಲ್ಲಿ ಶನಿವಾರ (ಮೇ 5) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೆ ಮಂಜು, ತಮ್ಮ 'ಗಾಡ್ಫಾದರ್' ಚಿತ್ರವನ್ನು ಜೂನ್ 8 ಅಥವಾ ಜೂನ್ 15ಕ್ಕೆ ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸೂಕ್ತ ಸಮಯ ನೋಡಿ ತಮ್ಮ 'ಗಾಡ್ಫಾದರ್' ಚಿತ್ರವನ್ನು ಸೆನ್ಸಾರ್ಗೆ ಕಳುಹಿಸುವುದಾಗಿಯೂ ಅವರು ಹೇಳಿದರು.
ಚಿತ್ರರಂಗದ ಹಿತದೃಷ್ಟಿಯಿಂದ ತಮ್ಮ ಚಿತ್ರವನ್ನು ಮುಂದೂಡಿ 'ಕಠಾರಿವೀರ' ಚಿತ್ರಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ' ಕಠಾರಿವೀರ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡು 100 ದಿನ ಪೂರೈಸಲಿ ಎಂದು ಹಾರೈಸಿದರು. ಈ ಮೂಲಕ ಎರಡು ಬಿಗ್ ಬಜೆಟ್ ಚಿತ್ರಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆಬಿದ್ದಂತಾಗಿದೆ.
No comments:
Post a Comment